ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಬಿಜೆಪಿ ಭ್ರಷ್ಟ ಸರ್ಕಾರಕ್ಕೆ ಜನರು ಬೇಸತ್ತು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಬಯಸುತ್ತಿದ್ದಾರೆ. ಅಕಾಲಿಕ ಮಳೆಯಿಂದ ರೈತರ ಬೆಳೆ ಹಾನಿಯಾದರೂ ಸರ್ಕಾರ ಇನ್ನೂ ಏಚ್ಚೆತ್ತಿಲ್ಲ ಎಂದರು. ಅಭ್ಯರ್ಥಿ ಭೀಮಣ್ಣಾ ನಾಯ್ಕ, ಮುಖಂಡ ಪ್ರಶಾಂತ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೋರ್ವೆಕರ, ಯುವ ಮುಖಂಡ ರವಿ ತೋರಣಗಟ್ಟಿ, ಎಚ್.ಬಿ. ಪರಶುರಾಮ ಮಾತನಾಡಿದರು. ಪುರಸಭೆ ಅಧ್ಯಕ್ಷ ಅಜರ ಬಸರೀಕಟ್ಟಿ, ಮುಖಂಡರಾದ ಕೃಷ್ಣ ಪಾಟೀಲ, ಸಂತೋಷ ರೇಣಕೆ, ಬಿ.ಡಿ. ಚೌಗಲೆ ಶಂಕರ ಬೆಳಗಾಂವಕರ, ಪುರಸಬೆಯ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ವಿವಿಧ ಗ್ರಾಮ ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.