ಜಿಲ್ಲಾ ಘಟಕದ ಕೆ.ಜಿ.ನಾಯ್ಕ ಮಾತನಾಡಿ, ‘ಸೇನೆಗೆ ಸ್ವಾತಂತ್ರ್ಯ ನೀಡಬೇಕು. ಕಾಶ್ಮೀರದಲ್ಲಿ ಸೇನೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆದರೂ, ಸೈನಿಕರು ಸುಮ್ಮನಿರುವ ಪರಿಸ್ಥಿತಿ ಇದೆ. ಪಾಕಿಸ್ತಾನ ಜಿಂದಾಬಾದ್ ಎಂದು ಉಗ್ರರನ್ನು ಹೊಗಳುವ ಮಂದಿ ದೇಶದಲ್ಲಿ ಅನೇಕರಿದ್ದಾರೆ. ಇವರಿಗೆ ಶಿಸ್ತಿನ ಪಾಠ ಕಲಿಸಬೇಕು’ ಎಂದರು. ಪ್ರಮುಖರಾದ ವಿನೋದ ಪ್ರಭು, ಆರ್.ಡಿ.ಹೆಗಡೆ, ವಿವೇಕಾನಂದ ವೈದ್ಯ, ಗಣಪತಿ ನಾಯ್ಕ, ಆರ್.ವಿ.ಹೆಗಡೆ, ಸಿಕಂದರ್ ಸುಂಠಿ, ದೀಪಾ ಸಣ್ಣಲಿಂಗಣ್ಣನವರ ಇದ್ದರು.