ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ತಂಡದ ಸದಸ್ಯರಲ್ಲಿ ಒಬ್ಬರಾದ ಕುಮಟಾದ ಸಂತೋಷ ಗೋಪಾಲ ಅಂಬಿಗ, ‘ನಮಗೆ ಕೆಲಸ ಕೊಟ್ಟ ಸಾಹುಕಾರರು ನಮ್ಮನ್ನು ಊರಿಗೆ ಕಳುಹಿಸಿಕೊಡಲು ತುಂಬ ಪ್ರಯತ್ನಿಸಿದರು. ಎಲ್ಲ ಕಡೆ ನಾಕಾಬಂದಿ ಹಾಕಲಾಗಿದ್ದು, ವಾಹನಗಳ ಸಂಚಾರವಿಲ್ಲ. ನಾವು ಅಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ನೋಡಿಕೊಂಡರು. ಆದರೆ, ಇನ್ನೂ ಅಲ್ಲೇ ಇದ್ದರೆ ಮುಂದೇನು ಎಂಬ ಆತಂಕವಿತ್ತು. ಹಾಗಾಗಿ ಎಲ್ಲರೂ ಸೇರಿ ರೈಲು ಹಳಿಯಲ್ಲೇ ನಡೆದುಕೊಂಡು ಹೊರಟೆವು’ ಎಂದು ಹೇಳಿದರು.