ದಾಂಡೇಲಿ: ಮೊಬೈಲ್ನಲ್ಲಿ ಹೆಚ್ಚು ಹೊತ್ತುಸಮಯ ವ್ಯರ್ಥ ಮಾಡಬೇಡಎಂದು ಅಮ್ಮ ಬುದ್ಧಿವಾದ ಹೇಳಿದ್ದಕ್ಕೆ ಬೇಸರಗೊಂಡ ಬಾಲಕನೊಬ್ಬ, ಆಜಾದ್ ನಗರದ ಶಿವಾಜಿ ಗಲ್ಲಿಯಲ್ಲಿಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಂಗೂರ ನಗರ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ಶೋಹೆಬ್ (17) ಆತ್ಮಹತ್ಯೆ ಮಾಡಿಕೊಂಡವನು. ಅವನತಂದೆ ಉದ್ಯೋಗ ನಿಮಿತ್ತ ದುಬೈನಲ್ಲಿದ್ದಾರೆ.
ರಂಜಾನ್ ಹಬ್ಬದ ಖರೀದಿಗೆಂದು ತಾಯಿ ಶನಿವಾರ ಸಂಜೆ ಮಾರುಕಟ್ಟೆಗೆ ಹೋಗಿದ್ದ ಸಂದರ್ಭದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.