‘ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿದ್ದ ನಾವು ನೀರು ಸರಬರಾಜು, ಕುಡಿಯುವ ನೀರಿನ ಗುಣಮಟ್ಟ, ಸರ್ವೆ ಕಾರ್ಯಗಳನ್ನು ಮಾಡುತ್ತಿದ್ದೆವು. ಚಾಲ್ತಿಯಲ್ಲಿದ್ದ ಮತ್ತು ಹಾಳಾದ ಕೊಳವೆಬಾವಿ ಮಾಹಿತಿ, ಸ್ಥಳ ಪರಿಶೀಲನೆ, ಕಚೇರಿ ಕೆಲಸಗಳನ್ನು ಸಹ ನಿರ್ವಹಿಸುತ್ತಿದ್ದೆವು. ಈಗ ಯೋಜನೆ ಪೂರ್ಣಗೊಂಡಿರುವ ಕಾರಣ ನೀಡಿ, ಇಲಾಖೆ ಆಯುಕ್ತರು ಮಾರ್ಚ್ 30ರಿಂದ ನಮ್ಮನ್ನು ಕೆಲಸದಿಂದ ತೆಗೆಯುವಂತೆ ಆದೇಶ ಹೊರಡಿಸಿದ್ದಾರೆ’ ಎಂದು ಬಿಆರ್ಸಿಯೊಬ್ಬರು ಹೇಳಿದರು.