‘40 ವರ್ಷಗಳ ಹಿಂದೆ ಸೂಪಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸರ್ಕಾರ ಭರವಸೆ ನೀಡಿದ್ದ ಪ್ರಕಾರ, ಕುಡಿಯುವ ಮತ್ತು ಕೃಷಿ ಉದ್ದೇಶಕ್ಕಾಗಿ ನೀರು ಒದಗಿಸಬೇಕಿತ್ತು. ಆದರೆ, ಅದಿನ್ನೂ ಈಡೇರಿಲ್ಲ. ಸ್ಥಳೀಯರಿಗೆ ಮೊದಲು ಯೋಜನೆ ರೂಪಿಸುವ ಬದಲು ದಾಂಡೇಲಿ, ಹಳಿಯಾಳ ಮತ್ತು ಅಳ್ನಾವರ ತಾಲ್ಲೂಕುಗಳಿಗೆ ಕಾಳಿ ನದಿಯ ನೀರನ್ನು ಸಾಗಿಸಲಾಗುತ್ತಿದೆ. ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ಉಗಮವಾದರೂ ನಮಗೇ ಒಂದು ಹನಿ ನೀರನ್ನೂ ಸರ್ಕಾರ ಒದಗಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.