ಎದುರಿನಿಂದ ಬಂದ ವಾಹನವನ್ನು ತಪ್ಪಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಬಸ್ ಮೋರಿಗೆ ಜಾರಿದೆ. ನಂತರ ಬಸ್ ಅನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಎರಡೂ ಇಕ್ಕೆಲಗಳಲ್ಲಿ ಅಡಿಕೆ ತೋಟವಿದ್ದು, ನಡುವಿನ ರಸ್ತೆಯಲ್ಲಿ ಏಕಕಾಲಕ್ಕೆ ಒಂದು ಬಸ್ ಹೋಗುವಷ್ಟು ಅಗಲವಾದ ಜಾಗವಿದೆ. ಇದೇ ಕಾರಣಕ್ಕೆ ಅಪಘಾತ ಸಂಭವಿಸಿದೆ.