ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಮಾತನಾಡಿ, ‘ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಸದಾ ಜಾಗೃತವಾಗಿರಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಶಿಬಿರಗಳು ಪೂರಕವಾಗಿವೆ’ ಎಂದರು. ಗೈಡ್ಸ್ನ ಜಿಲ್ಲಾ ಘಟಕದ ಉಪಾಧ್ಯಕ್ಷೆ ಸೂರಜ್ರಾಣಿ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಗೈಡ್ಸ್ನ ರಾಜ್ಯ ಘಟಕದ ಆಯುಕ್ತೆ ಜಾನಕಿ ವೇಣುಗೋಪಾಲ, ಆಯುಕ್ತ ಎಂ.ಎಂ.ಭಟ್ಟ, ಬ್ರಹ್ಮಕುಮಾರಿ ವೀಣಾಜಿ, ವಿರೇಶ ಮಾದರ, ಜ್ಞಾನೇಶ, ಶ್ವೇತಾ ಇದ್ದರು. ಜ್ಯೋತಿ ಭಟ್ಟ ಸ್ವಾಗತಿಸಿದರು. ಮಾರುತಿ ಉಪ್ಪಾರ ನಿರೂಪಿಸಿದರು. ವಿ.ಎಚ್.ಭಟ್ಕಳ ವಂದಿಸಿದರು.