ಉಪಚುನಾವಣೆಯ ಬಗ್ಗೆ ತಾಲ್ಲೂಕಿನಲ್ಲಿ ಅಷ್ಟೊಂದು ಉತ್ಸಾಹ ಕಂಡುಬರುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಇಲ್ಲಿಯವರೆಗೂ ಉಪಚುನಾವಣೆಯ ಕಾವು ವೇಗ ಪಡೆದಿಲ್ಲ. ರೈತರಿಗೆ ಸುಗ್ಗಿಕಾಲ ಆಗಿದ್ದರಿಂದ, ರಾಜಕೀಯ ಪಕ್ಷಗಳಲ್ಲಿರುವ ರೈತರು, ಮತದಾರರು ಪ್ರಚಾರಕ್ಕಿಂತ ಹೆಚ್ಚು ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ.