ಜಗಲಬೇಟ ಗ್ರಾಮದ ಚರಣರಾಜ ಕೇಶವ ಖಾರ್ವಿ (30) ವಿರುದ್ಧ ದೂರು ದಾಖಲಾಗಿದೆ. ಅವರು ಮಾರ್ಚ್ 13ರಂದು ಕುವೈತ್ನಿಂದ ವಾಪಸಾಗಿದ್ದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ ಬಸಣ್ಣ ಪಾಟೀಲ, ಮರುದಿನ ಅವರ ಮನೆಗೆ ಹೋಗಿ 14 ದಿನಗಳ ಹೋಮ್ ಕ್ವಾರಂಟೈನ್ ಬಗ್ಗೆ ತಿಳಿಸಿಬಂದಿದ್ದರು. ಅಲ್ಲದೇ ಅವರಿಗೆ ಮುಖಗವಸು ನೀಡಿ, ಹೊರಗಡೆ ತಿರುಗಾಡದೇ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿದ್ದರು.