‘ಎರಡನೇ ಮಹಡಿ ಏರಿ ಅದರ ಬಾಲ್ಕನಿ ಮೂಲಕ ಕಿಟಕಿ ಲಿಂಟಲ್ ಮೇಲೆ ಸಾಗಿ ಬೆಕ್ಕಿನ ಬಳಿ ಬಂದಾಗ ಮೊದಲು ಅದು ಕೂಗಿ ಹೆದರಿಸಿತು. ಭಯದಿಂದ ಅದು ಕೆಳಗೆ ಜಿಗಿಯದಂತೆ ನಿಧಾನವಾಗಿ ಬಳಿ ಸಾಗಿ, ಅದನ್ನು ಹಿಡಿದು ಚೀಲದಲ್ಲಿ ಹಾಕಿ ಕೆಳಗೆ ಬಿಟ್ಟೆ’ ಎಂದು ಬೆಕ್ಕನ್ನು ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಕುಮಾರ ಗೌಡ ತಿಳಿಸಿದರು. ಈ ಕಾರ್ಯಕ್ಕಾಗಿ ನ್ಯಾಯಾಲಯ ಸಿಬ್ಬಂದಿ, ಸಾರ್ವಜನಿಕರು ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಶ್ಲಾಘಿಸಿದರು.