ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಬಾಲಕಿಗೆ ವಿವಾಹ ತಡೆದ ಅಧಿಕಾರಿಗಳು

Last Updated 30 ಜೂನ್ 2020, 11:26 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಶೇಜವಾಡದ ಸಭಾಂಗಣವೊಂದರಲ್ಲಿ ಮಂಗಳವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದಿದ್ದಾರೆ. ಬಾಲಕಿಗೆ 18 ವರ್ಷವಾಗುವವರೆಗೆ ಮದುವೆ ಮಾಡಿಸದಂತೆ ಪಾಲಕರ ಮನವೊಲಿಸಿದ್ದಾರೆ.

ಬಾಲಕಿಗೆ ಮದುವೆ ಮಾಡಿಸಲುಸಿದ್ಧತೆ ನಡೆದಿರುವ ಬಗ್ಗೆಬಂದ ಅನಾಮಿಕ ಕರೆಯನ್ನು ಆಧರಿಸಿ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮದುವೆ ಮಂಟಪ ಶೃಂಗರಿಸಿ, ವಧು ವರರ ಕಡೆಯವರು ಸೇರಿದ್ದು ಕಂಡುಬಂತು. ಅಧಿಕಾರಿಗಳು ಬಾಲಕಿಯ ವಯಸ್ಸಿನ ಬಗ್ಗೆ ದಾಖಲೆ ಕೇಳಿದಾಗ ಪಾಲಕರು ಆಧಾರ್ ಕಾರ್ಡ್ ನೀಡಿದರು.ಅದರ ಬದಲು ಶಾಲಾ ದಾಖಲಾತಿಯ ದಾಖಲೆಯನ್ನು ನೀಡುವಂತೆ ಸೂಚಿಸಿದರು.

ಅದರಂತೆ ಪಾಲಕರು ಬಾಲಕಿಯ ಶಾಲಾ ಅಂಕಪಟ್ಟಿ ನೀಡಿದರು. ಆಕೆಗೆ 18 ವರ್ಷವಾಗದಿರುವುದು ಅದರಲ್ಲಿ ದೃಢಪಟ್ಟಿತು. ಹಾಗಾಗಿ ಮದುವೆ ನಿಲ್ಲಿಸಲು ಅಧಿಕಾರಿಗಳು ಪಾಲಕರ ಮನವೊಲಿಸಿದರು.

ಬಾಲಕಿಯಆಧಾರ್ ಕಾರ್ಡ್‍ನಲ್ಲಿ ಆಕೆಯ ಜನ್ಮ ವರ್ಷ2002 ಎಂದು ನಮೂದಾಗಿದೆ. ಆದ್ದರಿಂದ ಆಕೆಗೆ 18 ವರ್ಷವಾಗಿದೆ ಎಂದುಭಾವಿಸಿದವರನ ಕಡೆಯವರು, ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು.ವಧುವಿನಕಡೆಯವರುಕಡುಬಡವರಾದ ಕಾರಣ ಮಗಳಿಗೆ ಬೇಗನೆ ಮದುವೆ ಮಾಡಿಸುವ ಹಂಬಲದಲ್ಲಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದಮಕ್ಕಳ ರಕ್ಷಣಾ ಘಟಕದ ಅಧಿಕಾರಿದೇವಿದಾಸ್, ‘ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಗೆ 17 ವರ್ಷ 2ತಿಂಗಳು ಪ್ರಾಯವಾಗಿದ್ದು ದೃಢಪಟ್ಟಿತು. ಹಾಗಾಗಿ 18 ವರ್ಷವಾಗುವವರೆಗೂ ಆಕೆಗೆ ಮದುವೆ ಮಾಡಿಸುವುದಿಲ್ಲ. ತಪ್ಪಿದರೆ ಕ್ರಮ ಕೈಗೊಳ್ಳಬಹುದುಎಂದುಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಮಕ್ಕಳ ರಕ್ಷಣ ಘಟಕದ ಸ್ಮಿತಾ ನಾಯಕ, ಕಂದಾಯ ಅಧಿಕಾರಿ ಹಬ್ಬು, ಗ್ರಾಮೀಣ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT