ಮಠದ ಸುಧರ್ಮ ಸಭಾಂಗಣದಲ್ಲಿ ಭಾನುವಾರ ನಡೆದ ಮಾತೆಯರ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ ಮಾತನಾಡಿದ ಅವರು, ‘ಸಂಪ್ರದಾಯ, ವಿನಯತೆ, ಪರಂಪರೆಯ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ತಿಳುವಳಿಕೆ ನೀಡುವತ್ತ ಗಮನ ನೀಡಬೇಕಾಗಿದೆ. ಈಗಿನ ಜೀವನ ಶೈಲಿಗೆ ಮೊರೆಹೋಗಿ ಯುವ ಪೀಳಿಗೆ ಸಂಪ್ರದಾಯ ಮರೆಯುತ್ತಿದ್ದು ಆತಂಕಕಾರಿ. ಹೀಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕು’ ಎಂದರು.