ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪರ ಪ್ರಚಾರ ಮಾಡಲು ರಾಜ್ಯಕ್ಕೆ ಬಂದಾಗ ಕುರ್ಚಿ ತೂರಿ ಗದ್ದಲ ಎಬ್ಬಿಸಿ ಎಂದು ಪ್ರಚೋದನಾಕಾರಿಯಾಗಿ ಶುಕ್ರವಾರ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ಅವರು ಜಾತಿ–ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಪರ ಪ್ರಚಾರ ಮಾಡಲು ಮಂಡ್ಯ ಜಿಲ್ಲೆಗೆ ಬರುವುದನ್ನು ತಡೆಯಬೇಕು. ಜಿಲ್ಲೆಗೆ ಪ್ರವೇಶಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.