‘ಇನ್ನೂ ದೊಡ್ಡ ದೊಡ್ಡ ಮಂದಿ ಬಿಜೆಪಿಗೆ ಬರುವವರಿದ್ದಾರೆ. ಬಿಜೆಪಿಯು ಸಮುದ್ರ ಇದ್ದಂತೆ. ಯಾರು ಬಂದರೂ ಸಮುದ್ರದ ನೀರು ಉಪ್ಪು ಆಗಿರುತ್ತದೆ. ಯಾರೋ ಒಬ್ಬಿಬ್ಬರು ಕಾಂಗ್ರೆಸ್ ಪಕ್ಷಕ್ಕೆ ಹೋದರೂ, ಪಕ್ಷಕ್ಕೆ ಏನೂ ವ್ಯತ್ಯಾಸ ಆಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಒಮ್ಮುಖವಾಗಿ ಬೆಂಬಲ ನೀಡಿದಂತೆ, ಈ ಸಲ ಶಿವರಾಮ ಹೆಬ್ಬಾರ್ ಅವರನ್ನು ಬೆಂಬಲಿಸಬೇಕು’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್.ಟಿ.ಪಾಟೀಲ, ವಿನೋದ ಪ್ರಭು, ಕೃಷ್ಣ ಎಸಳೆ, ಉಮೇಶ ಬಿಜಾಪುರ, ಮಹೇಶ ಹೊಸಕೊಪ್ಪ ಇದ್ದರು.