ಕಾರ್ಯಕರ್ತೆಯರ ಬಡ್ತಿಯಿಂದ ತೆರವಾಗುವ ಸ್ಥಾನಗಳನ್ನೂ ತಕ್ಷಣವೇ ತುಂಬಬೇಕು ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. ಮಕ್ಕಳ ಸಮಗ್ರ ಅಭಿವೃದ್ಧಿಯ ಪರಿಷ್ಕೃತ ಯೋಜನೆಯನ್ನು (ಐಸಿಡಿಎಸ್) ಜಾರಿಗೊಳಿಸಲು ದೇಶದ ಹಿಂದುಳಿದ 115 ಜಿಲ್ಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಕರ್ನಾಟಕದ ರಾಯಚೂರು, ಯಾದಗಿರಿ ಸೇರಿವೆ.