ಬಾಗಲಕೋಟೆಯಿಂದ ಬಂದಿದ್ದರಾಜಶೇಖರ ಚೌವ್ಹಾಣ್ (50), ತಾಲ್ಲೂಕಿನ ಸುಂಕಸಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶುಕ್ರವಾರ ತಿರುಗಾಡುತ್ತಿದ್ದರು.ಅವರನ್ನು ಪ್ರಶ್ನಿಸಿದಾಗ ತಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಎಂದು ಹೇಳಿದ್ದರು.ಅಗತ್ಯ ಕೆಲಸವಿಲ್ಲದೇಸಂಚರಿಸುವುದನ್ನು ನಿಷೇಧಿಸಿದ್ದರೂ ಪಾಲಿಸಲಿಲ್ಲ. ಅವರನ್ನು ವಶಕ್ಕೆ ಪಡೆದ ಪೊಲೀಸರು, ಅಂಕೋಲಾದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.