ಕಾವಿ ತೊಟ್ಟವರೆಲ್ಲ ಸನ್ಯಾಸಿಯಾಗುವುದಿಲ್ಲ. ಕರ್ತವ್ಯದ ಫಲಕ್ಕೆ ಆಸೆ ಪಡದೇ, ಮಾಡುವ ಕರ್ಮದಲ್ಲಿ ನಿಷ್ಠೆಯುಳ್ಳವನು ಯೋಗಿಯಾಗುತ್ತಾನೆ. ಅಂತಹವರಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಒಬ್ಬರು. ಅವರು ಯಕ್ಷರಂಗದ ಯೋಗಿ. ಕಾಯಕನಿಷ್ಠೆ, ಕರ್ತವ್ಯನಿಷ್ಠೆಗೆ ಹೆಸರಾದ ಭಾಗವತರಂಥ ವ್ಯಕ್ತಿ ಯಕ್ಷಗಾನಕ್ಕೆ ಸಿಕ್ಕ ಫಲವಾಗಿ ಈ ಕಲೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಿದರು.
ಯಕ್ಷಗಾನ ಭಾಗವತರಾದ ತಿಮ್ಮಪ್ಪ ಭಾಗವತ ಬಾಳೆಹದ್ದ, ಸತೀಶ ಹೆಗಡೆ ದಂಟ್ಕಲ್, ರವೀಂದ್ರ ಭಟ್ಟ ಅಚುವೆ, ಗಜಾನನ ಭಟ್ಟ ತುಳಗೇರಿ ಗಾಯನದಲ್ಲಿ, ಶಂಕರ ಭಾಗವತ, ಗಣಪತಿ ಕವ್ವಾಳೆ, ಶ್ರೀಪತಿ ಹೆಗಡೆ ಕಂಚಿಮನೆ ಮದ್ದಲೆ ಹಾಗೂ ಲಕ್ಷ್ಮೀನಾರಾಯಣ ಸಂಪ ಚಂಡೆಯಲ್ಲಿ ನಮನ ಸಲ್ಲಿಸಿದರು. ಕಲಾವಿದರಾದ ನೀರ್ನಳ್ಳಿ ಗಣಪತಿ ಹಾಗೂ ಸತೀಶ ಯಲ್ಲಾಪುರ ಚಿತ್ರ ನಮನ ಸಲ್ಲಿಸಿದರು. ಪದ್ಮನಾಭ ಆರೇಕಟ್ಟಾ ಕಾವ್ಯ ಕಾವ್ಯನಮನ ಸಲ್ಲಿಸಿದರು.