ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಗುಡ್ಡ ಕುಸಿತ– ಮಣ್ಣು ಕೆಲಸದ ಗುತ್ತಿಗೆದಾರ ಸಾವು

Last Updated 9 ನವೆಂಬರ್ 2021, 10:45 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿಯ ಸಮೀಪದ ಚೌಡಗೇರಿಯ ಬಳಿ ಮಂಗಳವಾರ ಮಣ್ಣು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಮಣ್ಣಿನ ಗುಡ್ಡ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಅಂಕೋಲಾದ ಸೀಳ್ಯಾ ಗ್ರಾಮದ ಮೋಹನದಾಸ ಎಚ್. ನಾಯಕ (56) ಎಂದು ಗುರುತಿಸಲಾಗಿದೆ.

ಗುಡ್ಡದ ಮಣ್ಣು ತೆರವುಗೊಳಿಸುವ ಗುತ್ತಿಗೆ ಪಡೆದಿದ್ದ ಅವರು ಮಣ್ಣು ತೆಗೆಯುತ್ತಿರುವುದನ್ನು ವಿಕ್ಷಿಸುತ್ತಿದ್ದಾಗ ಒಮ್ಮೆಲೆ ಮಣ್ಣು ಕುಸಿದು ಬಿತ್ತೆನ್ನಲಾಗಿದೆ. ಮಣ್ಣಿನ ಅಡಿಗೆ ಸಿಲುಕಿ ಮೇಲೇಳಲಾಗದೇ ಸಾವನ್ನಪ್ಪಿದ್ದಾರೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷವಹಿಸಿದ ಆರೋಪದಡಿಜಾಗದ ಮಾಲೀಕರು,ಜೆ.ಸಿ.ಬಿ. ನಿರ್ವಹಣೆ ಮಾಡುತ್ತಿದ್ದವರ ಮೇಲೆ ದೂರು ದಾಖಲಿಸಲಾಗುವುದು ಎಂದು ಪಿ.ಎಸ್. ಐ. ನವೀನ್ ನಾಯ್ಕ ತಿಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯಿಂದ ಮಣ್ಣು ತೆಗೆಯಲು ಅನುಮತಿ ಪಡೆದಿದ್ದಾರೆಯೋ ಅಥವ ಅಕ್ರಮವಾಗಿಮಣ್ಣು ತೆಗೆಯುತ್ತಿದ್ದಾರೆಯೋ ಎನ್ನುವುದರ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT