’ಕಾಡಿಗೆ ಬೆಂಕಿ ಬಿದ್ದರೆ ಮರಗಳು ಬಲಿಯಾಗುತ್ತವೆ, ಪ್ರಾಣಿಗಳು ಸಾಯುತ್ತವೆ, ಪ್ರಕೃತಿಯ ನಾಶಕ್ಕೆ ನಾವು ಕಾರಣರಾಗುತ್ತೇವೆ ಎಂಬುದನ್ನು 10 ನಿಮಿಷಗಳ ಕಿರು ನಾಟಕದ ಮೂಲಕ ನಾನು, ನಾರಾಯಣ ಅಪ್ಪು ಸಿದ್ದಿ, ಕೃಷ್ಣ ಸಿದ್ದಿ, ಮೀನಾಕ್ಷಿ ಸಿದ್ದಿ, ನಾರಾಯಣ ಸಿದ್ದಿ ಅವರು ಜನರಿಗೆ ಮನದಟ್ಟು ಮಾಡಿದ್ದೆವು. ಕೆಳಾಸೆಯಲ್ಲಿ ನಾವು ಈ ನಾಟಕ ಪ್ರದರ್ಶಿಸಿದ ಮೇಲೆ ಒಮ್ಮೆಯೂ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ. ಇದಕ್ಕಿಂತ ದೊಡ್ಡ ಯಶಸ್ಸು ಬೇರೇನು ಬೇಕು ?’ ಎಂದು ಸಂತೃಪ್ತ ಭಾವ ವ್ಯಕ್ತಪಡಿಸಿದರು.