ದುಬೈನಲ್ಲಿ ಕೆಲಸದಲ್ಲಿದ್ದ ಇಸಳೂರಿನ ಯುವಕನೊಬ್ಬ ಮಾ.4ರಂದು ಊರಿಗೆ ಮರಳಿದ್ದ. ಊರಿಗೆ ಬಂದ ಆತನ ಬಳಿ, 14 ದಿನ ಮನೆಯಲ್ಲೇ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ಆದರೆ, ಹೊಟ್ಟೆಪಾಡಿಗಾಗಿ ಈ ಯುವಕ ಕೆಲಸಕ್ಕೆ ಹೋಗುತ್ತಿದ್ದ. ಈ ಯುವಕನ ಪಕ್ಕದ ಮನೆಯ ಬಾಲಕನೊಬ್ಬನಿಗೆ ಥಂಡಿ, ಕೆಮ್ಮು ಕಾಣಿಸಿಕೊಂಡಿತ್ತು. ಅದರ ನಡುವೆಯೇ ಶಾಲೆಗೆ ಬಂದಿದ್ದ ಬಾಲಕನಿಗೆ, ಅನಾರೋಗ್ಯವಾಗಿರುವ ವಿಷಯ ಊರೆಲ್ಲ ಹರಡಿತು. ದುಬೈನಿಂದ ಬಂದ ಯುವಕನ ಪಕ್ಕದ ಮನೆಯ ಬಾಲಕನಾಗಿದ್ದರಿಂದ, ಶಾಲೆಗೆ ಮಕ್ಕಳನ್ನು ಕಳುಹಿಸಿದ ಪಾಲಕರು ಆತಂಕಗೊಂಡರು.