ಮನೆ–ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆಯಿದೆ. ವಿನಾಕಾರಣ ರಸ್ತೆಗಿಳಿದರೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿ ವೃತ್ತದಲ್ಲಿ ಪೊಲೀಸರು ನಿಂತು, ರಸ್ತೆಯಲ್ಲಿ ಹೋಗುವ ಕಾರು, ದ್ವಿಚಕ್ರ ವಾಹನ ಸವಾರರನ್ನು ತಡೆದು ವಿಚಾರಿಸಿದರು. ‘ಔಷಧ, ಆಸ್ಪತ್ರೆಗಾಗಿ ಹಳ್ಳಿಯಿಂದ ಬಂದವರೇ ಹಲವರು ಇದ್ದರು. ಹೀಗಾಗಿ, ಅಂತಹವರ ಮೇಲೆ ಪ್ರಕರಣ ದಾಖಲಿಸಲಿಲ್ಲ’ ಎಂದು ಸಿಪಿಐ ಪ್ರದೀಪ ಪ್ರತಿಕ್ರಿಯಿಸಿದರು.