‘ಶೌಚ ಗುಂಡಿ ತುಂಬಿದ್ದು, ಖಾಲಿ ಮಾಡಿಲ್ಲವಾದ್ದರಿಂದ ಸಮಸ್ಯೆ ಎದುರಾಗಿದೆ. ಜನರು ಬಯಲಲ್ಲೇ ಮಲ– ಮೂತ್ರ ವಿಸರ್ಜಿಸುವುದರಿಂದ ದುರ್ನಾತ ಬೀರುತ್ತಿದೆ. ಈ ಕುರಿತು ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆಟೊ ಚಾಲಕ ಕುಮಾರಸ್ವಾಮಿ, ಸ್ಥಳೀಯರಾದ ಬಿ. ಶಿವಶಂಕರ್, ಜೆ. ನರಸಿಂಹ, ಬಸವಣ್ಣಿ ದೂರಿದರು.