ಭಟ್ಕಳದ ಮಹಮ್ಮದ್ ಅದಿಲ್ ಡುಬ್ಬಾಳ್, ಮಹಮ್ಮದ್ ರಾಹೀನ್, ಮಹಮ್ಮದ್ ರಾಹೀಕ್ ಹಾಗೂ ರಿಜ್ವಾನ್ ಅಬ್ದುಲ್ ರಶೀದ್ ಪಫಾರ್ ಬಂಧಿತ ಆರೋಪಿಗಳು. ‘ಕೆಳಗಿನೂರು ಗ್ರಾಮದ ಅಪ್ಸರಕೊಂಡ, ಮುಗಳಿ, ನಾಜಗಾರ, ಹಕ್ಕಲಕೇರಿ ಮೊದಲಾದೆಡೆಗಳಲ್ಲಿ ಕಳೆದ ಒಂದು ವರ್ಷದಿಂದ ರಾತ್ರಿ ಬೆಳಗಾಗುವುದರೊಳಗೆ ದನಗಳು ನಾಪತ್ತೆಯಾಗುತ್ತಿದ್ದವು. ದನಗಳ ನಾಪತ್ತೆಗೆ ಕಾರಣ ತಿಳಿಯುವ ಯತ್ನದಲ್ಲಿದ್ದ ಗ್ರಾಮಸ್ಥರಿಗೆ ಶುಕ್ರವಾರ ಬೆಳಗಿನ ಜಾವ ಈ ದುಷ್ಕೃತ್ಯ ನಡೆಸುತ್ತಿದ್ದವರು ಸಿಕ್ಕಿಬಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಳ್ಳರನ್ನು ಥಳಿಸಿದರು' ಸ್ಥಳೀಯರೊಬ್ಬರು ತಿಳಿಸಿದರು.