ರಂಗಾಪುರದಲ್ಲಿ ಕುಂಬಾರಕಟ್ಟೆ ಕೆರೆ ಒಡೆದು ಕೃಷಿ ಭೂಮಿಗೆ ಹಾನಿಯಾಗಿದೆ. ಬಾಳೆಕಾಯಿಮನೆ ಗ್ರಾಮದ ತುಳಗೇರಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾನಳ್ಳಿಯ ಜುಮ್ಮನಕಾನದಲ್ಲಿ ಸೇತುವೆಗೆ ಹಾನಿಯಾಗಿದೆ. ದಾಸನಕೊಪ್ಪ, ಸರಗುಪ್ಪ, ಹನುಮಂತಿ, ಮುಗವಳ್ಳಿ, ತೆರಕನಳ್ಳಿ, ಹುಲೇಕಲ್, ಪುಟ್ಟನಮನೆ, ಗಡಗೇರಿ ಮೊದಲಾದ ಹಳ್ಳಿಗಳಲ್ಲಿ ಬಾಳೆ, ಭತ್ತ, ಅಡಿಕೆ, ಮೆಕ್ಕೆಜೋಳದ ಬೆಳೆಗಳು ನಷ್ಟವಾಗಿವೆ.