ಟ್ಯಾಗೋರ್ ಪುತ್ಥಳಿ:ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಸಾಗುವ ದಾರಿಯಲ್ಲಿ ಸ್ವಾಗತ ಕಮಾನನ್ನು 1994ರಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ 2004ರಲ್ಲಿ ಟ್ಯಾಗೋರರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಇದು ಕಡಲತೀರಕ್ಕೆ ಹೋಗುವವರನ್ನು ಆಕರ್ಷಿಸುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಲುವಾಗಿ ಪುತ್ಥಳಿಯನ್ನು 2018ರ ಮಾರ್ಚ್ 19ರಂದು ತೆರವು ಮಾಡಲಾಗಿತ್ತು. ಅದನ್ನು ಕಡಲತೀರದಲ್ಲಿರುವ ಗೋದಾಮಿನಲ್ಲಿ ಇಡಲಾಗಿತ್ತು.