ಗಡಿಯಾರದ ಮೌಲ್ಯವನ್ನು ಅರಿಯದೇ ಅದನ್ನು ಪುಡಿಗಟ್ಟಿದ್ದ ಅಧಿಕಾರಿಗಳು, ಅದರಲ್ಲಿ ಬಂಗಾರವಿಲ್ಲವೆಂದು ಖಚಿತವಾದ ಬಳಿಕ ಟ್ರೇನಲ್ಲಿ ಇಟ್ಟು ಇಸ್ಮಾಯಿಲ್ ಅವರಿಗೆ ಹಿಂದಿರುಗಿಸಿದ್ದರು. ಪುಡಿಪುಡಿಯಾದ ಕೈಗಡಿಯಾರವನ್ನು ಕಂಡು ಕಂಗಾಲಾದ ಅವರು, ತಮ್ಮ ಗಡಿಯಾರವನ್ನು ಮೊದಲಿನ ಸ್ಥಿತಿಯಲ್ಲೇ ನೀಡುವಂತೆ ಪಟ್ಟು ಹಿಡಿದರು. ಬಳಿಕ ಗಡಿಯಾರದ ಮೌಲ್ಯವನ್ನು ಕೇಳಿದ ಕಸ್ಟಮ್ಸ್ ಅಧಿಕಾರಿಗಳೂ ಹೌಹಾರಿದ್ದರು.