ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಹಂತದ ಸಂಕೀರ್ಣ ಪರಿಶೀಲಿಸಿದ ಜಿಲ್ಲಾಧಿಕಾರಿ

‘ಪೌರಕಾರ್ಮಿಕರ ಗೃಹ ಭಾಗ್ಯ’ ಯೋಜನೆಯಲ್ಲಿ ಮನೆಗಳ ನಿರ್ಮಾಣ
Last Updated 4 ಜುಲೈ 2019, 12:36 IST
ಅಕ್ಷರ ಗಾತ್ರ

ಕಾರವಾರ:ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಅಡಿ ನಗರದ ಪಂಚರ್ಷಿವಾಡದಲ್ಲಿ ನಿರ್ಮಾಣವಾಗುತ್ತಿರುವವಸತಿ ಸಂಕೀರ್ಣವನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಗುರುವಾರ ಪರಿಶೀಲನೆ ನಡೆಸಿದರು.

ಅಂದಾಜು ₹ 18.4 ಕೋಟಿ ವೆಚ್ಚದಲ‌್ಲಿ ನಿರ್ಮಾಣವಾಗುತ್ತಿರುವ ಈ ಸಂಕೀರ್ಣದಲ್ಲಿ 16 ಪೌರಕಾರ್ಮಿಕರಿಗೆ ಮನೆಗಳನ್ನು ನೀಡಲಾಗುತ್ತಿದೆ.ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಗುಣಮಟ್ಟ ಸೇರಿದಂತೆ ಇತರ ವ್ಯವಸ್ಥೆಗಳನ್ನುಈ ವೇಳೆ ಅವರು ಪರಿಶೀಲಿಸಿದರು.

‘ಒಂದು ಯುನಿಟ್‌ಗೆ (ಮನೆ) ಸರ್ಕಾರ ₹ 7.5 ಲಕ್ಷ ಧನ ಸಹಾಯ ನೀಡುತ್ತದೆ. ಉಳಿದವುಗಳನ್ನು ನಗರಸಭೆಯೇ ಇತರ ಅನುದಾನಗಳಿಂದ ಭರಿಸಿ, ಮನೆ ನಿರ್ಮಿಸಿ ಕೊಡಬೇಕಿದೆ. ನಮ್ಮಲ್ಲಿ ಒಂದು ಯುನಿಟ್‌ಗೆ ₹ 11.5 ಲಕ್ಷ ವೆಚ್ಚ ಆಗಿದೆ’ ಎಂದುಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂರು ಒದಗಿಸುವ ರಾಜ್ಯ ಸರ್ಕಾರದ ಆಶಯವುಇಲ್ಲಿನ ನಗರಸಭೆಯ ಪೌರಾಯುಕ್ತರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದಾಗಿ ನೆರವೇರುತ್ತಿದೆ. ಹಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವುದಕ್ಕೆಸರ್ವರೂ ಅಭಿನಂದನಾರ್ಹರು’ ಎಂದರು.

‘ಉತ್ತಮ ಗುಣಮಟ್ಟದಲ್ಲೇ ಮನೆಗಳು ನಿರ್ಮಾಣವಾಗುತ್ತಿವೆ.ಸುತ್ತಲಿನಪರಿಸರಕೂಡ ಉತ್ತಮವಾಗಿದೆ. 16ಪೌರಕಾರ್ಮಿಕರಿಗೆಆಗಸ್ಟ್ 15ರಂದು ಈ ಮನೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇನ್ನುಳಿದ16ಮಂದಿಗೆ ಮನೆ ನಿರ್ಮಿಸಲುಜಾಗ ಹುಡುಕಲಾಗುತ್ತಿದೆ. ಶೀಘ್ರವೇ ಅದಕ್ಕೂ ಭೂಮಿಪೂಜೆ ಮಾಡಿಸಲಾಗುವುದು’ ಎಂದರು.

ಈ ವೇಳೆ ಸ್ಥಳದಲ್ಲಿದ್ದ ಪೌರಕಾರ್ಮಿಕರಕ್ಷೇಮವಿಚಾರಿಸಿದ ಅವರು, ಸಮಸ್ಯೆಗಳನ್ನು ಆಲಿಸಿದರು.

ನಗರಸಭೆಯ ಪೌರಾಯುಕ್ತ ಎಸ್.ಯೋಗೀಶ್ವರ್, ಸಹಾಯಕಕಾರ್ಯನಿರ್ವಾಹಕ ಎಂಜಿನಿಯರ್ ಮೋಹನರಾಜ್,ಪರಿಸರ ಅಧಿಕಾರಿ ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT