ಯಲ್ಲಾಪುರ: ತಾಲ್ಲೂಕಿನ ಪಣಸಗುಳಿ ಸೇತುವೆಯಿಂದ ಆ.24ರಂದು ಕೊಚ್ಚಿ ಹೋಗಿದ್ದ ಲಾರಿಯಲ್ಲಿ ಸಿಲುಕಿಕೊಂಡು ನೀರು ಪಾಲಾಗಿದ್ದ ಕಾರ್ಮಿಕನ ಶವ ಶುಕ್ರವಾರ ಪತ್ತೆಯಾಗಿದೆ. ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಸಮೀಪದ ಹನೇಹಳ್ಳಿ ಸಂದೀಪ ಆಗೇರ (35) ಮೃತರು.
ಗಂಗಾವಳಿ ನದಿಯಲ್ಲಿ ಮುಳುಗಿದ್ದ ಲಾರಿಯಲ್ಲಿ ಆರು ಜನರಿದ್ದರು. ಐವರು ಪ್ರಾಣಾಪಾಯದಿಂದ ಬಚಾವಾಗಿದ್ದರು. ಸಂದೀಪ ಲಾರಿಯೊಂದಿಗೆ ನೀರಿನಲ್ಲಿ ಮುಳುಗಿದ್ದರು. ಅವರಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ಹುಡುಕಾಟ ನಡೆಸಿದ್ದರು.
ಮೂರು ದೋಣಿಗಳು, ಒಂದು ಮೋಟಾರ್ ಬೋಟ್ನಲ್ಲಿ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಇಸ್ಮಾಯಿಲ್ ಹುಡೇಕರ್, ಗಂಗಾಧರ ಸಿದ್ದಿ, ಸಣ್ಯಾ ಸಿದ್ದಿ ಅವರು ಮೃತದೇಹವನ್ನು ದಡಕ್ಕೆ ತೆಗದುಕೊಂಡು ಬಂದರು.