ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ, ಭಾರತದಿಂದ ತುರ್ತು ಪರಿಹಾರ ಸಾಮಗ್ರಿಗಳನ್ನು ‘ಘರಿಯಲ್’ ನೌಕೆಯ ಮೂಲಕ ರವಾನಿಸಲಾಗಿದೆ. ನೌಕೆಯ ಸಿಬ್ಬಂದಿ ಜೊತೆ ಮಾತನಾಡಿದ ರಾಜನಾಥ ಸಿಂಗ್, ಪರಿಶ್ರಮವನ್ನು ಶ್ಲಾಘಿಸಿದರು. ‘ನೆರೆಹೊರೆ ಮೊದಲು’ ಎಂಬ ಸರ್ಕಾರದ ನೀತಿ ಮತ್ತು ದೇಶದೊಂದಿಗೆ ಸಮುದ್ರದಲ್ಲಿ ಗಡಿ ಹಂಚಿಕೊಂಡಿರುವ ನೆರೆಯ ದೇಶದೊಂದಿಗೆ ಬಾಂಧವ್ಯ ವೃದ್ಧಿಗೆ ಒತ್ತು ಕೊಟ್ಟರು.