ಕಾರವಾರದ ಭಾರತೀಯ ನೌಕಾಪಡೆಯ ತುರ್ತು ಸ್ಪಂದನ ತಂಡದ (ಇ.ಆರ್.ಟಿ) ಸದಸ್ಯರು ತಂಡದಲ್ಲಿದ್ದಾರೆ. 16 ಮಂದಿ ಮುಳುಗು ತಜ್ಞರು, ನಾಲ್ವರು ನಾವಿಕರು, ಜೀವರಕ್ಷಕ ಜಾಕೆಟ್ಗಳು, ಹಗ್ಗ ಮುಂತಾದ ಸಲಕರಣೆಗಳನ್ನು ತಂಡದವರು ಹೊಂದಿದ್ದಾರೆ. ಕದ್ರಾ ಜಲಾಶಯದ ಬಳಿ, ಮಲ್ಲಾಪುರ, ಕುರ್ನಿಪೇಟೆ ಹಾಗೂ ಕೈಗಾ ಸುತ್ತಮುತ್ತ ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ನೌಕಾದಳದ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾಪ್ಟನ್ ಅಜಯ್ ಕಪೂರ್ ತಿಳಿಸಿದ್ದಾರೆ.