‘ಮಳೆಗಾಲದ ಪೂರ್ವದಲ್ಲಿ ಮುಂದಿನ 8 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ಸಾಮಗ್ರಿ ದಾಸ್ತಾನಿಟ್ಟುಕೊಳ್ಳುತ್ತೇವೆ. ಈ ಅವಧಿಯಲ್ಲಿ ಗ್ರಾಮಕ್ಕೆ ಯಾವುದೇ ವಾಹನ ಬರಲು ಸಾಧ್ಯವಾಗದು. ಕಾಲ್ನಡಿಗೆಯಲ್ಲಿ ತೆರಳಬೇಕೆಂದರೆ ಕಾಲುಸಂಕ ದಾಟಿ ಹೋಗಬೇಕಾಗುತ್ತದೆ. ರೋಗಿಗಳನ್ನು ಕರೆದೊಯ್ಯಲು, ವಿದ್ಯಾರ್ಥಿಗಳು ಸಾಗಲು ತೊಡಕು ಉಂಟಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.