ಕೆಲವು ರೈತರ ಮಾಹಿತಿ ಸಾಲಮನ್ನಾ ತಂತ್ರಾಂಶದ ಎಫ್.ಎಸ್.ಡಿ.ಯಲ್ಲಿ ತಪ್ಪು ನೋಂದಣಿಯಾಗಿದೆ. ಇದನ್ನು ಸರಿಪಡಿಸಲು ಅವಕಾಶ ನೀಡಬೇಕು. ಕೆಲವು ರೈತರು ಸಾಲಮನ್ನಾಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಬಳಿಯಿರುವ ರೇಷನ್ ಕಾರ್ಡ್ ನೀಡಿದ್ದರು. ನಂತರ ಎಫ್.ಎಸ್.ಡಿ ಅಪ್ಲೋಡ್ ಮಾಡುವಾಗ ಬದಲಾದ ಹೊಸ ರೇಷನ್ ಕಾರ್ಡ್ ನೀಡಿದ್ದಾರೆ. ಇವೆರಡೂ ಮಾಹಿತಿ ತಾಳೆಯಾಗದೇ ಅವರ ಸಾಲಮನ್ನಾ ಆಗಿಲ್ಲ. ಆದರೆ, ಇವರೆಲ್ಲ ಸೌಲಭ್ಯಕ್ಕೆ ಅರ್ಹರೇ ಆಗಿದ್ದು, ಸರ್ಕಾರ ಇವರನ್ನು ಪರಿಗಣಿಸಬೇಕು ಎನ್ನುತ್ತಾರೆ ಯಡಳ್ಳಿ ಸೊಸೈಟಿ ಅಧ್ಯಕ್ಷ ಗಣಪತಿ ಹೆಗಡೆ.