‘ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಅನಗತ್ಯ. ಒಂಬತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿರುವ ಕಾರಣ ಅವರಿಗೆ ಆ ವ್ಯವಸ್ಥೆಯ ಅನುಭವ ಇರುವುದಿಲ್ಲ. ಹಾಗಾಗಿ ಅವರಿಗೆ ಗಣಿತ, ಕನ್ನಡ, ಇಂಗ್ಲಿಷ್ ಬರಿಯುವುದು ಕಷ್ಟ ಎಂಬ ಭಾವನೆಯಿದೆ. ಅವರಿಗೆ ಒಂದು ಸಲ ಅವಲೋಕನದ ಅವಶ್ಯಕತೆಯಿದೆ. ಈ ಬಾರಿ ಯಾವುದೇ ಮಕ್ಕಳನ್ನೂ ಅನುತ್ತೀರ್ಣಗೊಳಿಸುವುದಿಲ್ಲ. ಆದರೆ, ಯಾವ ರೀತಿ ಪರೀಕ್ಷೆ ಆಯೋಜಿಸಬೇಕು ಎಂಬ ಬಗ್ಗೆ ಈ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.