ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ, ಪೊಲೀಸರು, ಪತ್ರಕರ್ತರು ಹೀಗೆ ಅನುಮತಿ ಇದ್ದವರಿಗಷ್ಟೇ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಸಿಗುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಹಾಲಿನ ಕ್ಯಾನ್ ಸಾಗಿಸುವ ವಾಹನಗಳು ಇಂಧನ ಕೊರತೆ ಅನುಭವಿಸುತ್ತಿವೆ. ಬೇಸಿಗೆ ಕಾಲವಾಗಿರುವುದರಿಂದ ರೈತರಿಗೆ ತೋಟ, ಗದ್ದೆಗಳಿಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ. ಆದರೆ, ಅವರಿಗೆ ಪಂಪ್ಸೆಟ್ ಚಾಲು ಮಾಡಲು ಇಂಧನ ಸಿಗದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.