‘ಸದ್ಯ ಸಾಂಕೇತಿಕವಾಗಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ವನ ನಿರ್ಮಾಣಕ್ಕೆ 100 ಎಕರೆಯಷ್ಟು ಜಾಗ ನೀಡುವಂತೆ ಅರಣ್ಯ ಇಲಾಖೆಯನ್ನು ವಿನಂತಿಸಲಾಗುವುದು. ಧಾರ್ಮಿಕ ಪರಿಕಲ್ಪನೆಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸುವ ಆಶಯ ಹೊಂದಲಾಗಿದೆ. ಮೇವು, ಹಣ್ಣಿನ ಗಿಡಗಳನ್ನೊಳಗೊಂಡು ದೇವಿಯ ವನ ರಚಿಸಿದರೆ, ಪ್ರಾಣಿ–ಪಕ್ಷಿಗಳು, ದನಕರುಗಳಿಗೆ ಅನುಕೂಲವಾಗುತ್ತದೆ’ ಎಂದು ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಪ್ರತಿಕ್ರಿಯಿಸಿದರು.