ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಹಿಮಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಾ.ರಾಜಕುಮಾರ್ ಬಾಲ್ಯದಲ್ಲೇರಂಗಪ್ರವೇಶ ಮಾಡಿ, 1954ರಲ್ಲಿ ಬೆಡರ ಕಣ್ಣಪ್ಪ ಚಲನಚಿತ್ರದಲ್ಲಿ ನಟರಾದರು. ಅವರು ಅಭಿನಯವನ್ನೇ ದೇವರು ಎಂದು ಆರಾಧಿಸುತ್ತಿದ್ದರು. ಅವರ ವ್ಯಕ್ತಿತ್ವವೇ ಒಂದು ವಿಶ್ವವಿದ್ಯಾಲಯವಿದ್ದಂತೆ. ಮೇರು ನಟನಾಗಿ ಬೆಳೆದರೂ ತಾವು ಕಲಿಯುವುದು ಇನ್ನೂ ಇದೆ ಎನ್ನುತ್ತಿದ್ದರು. ಸಮಾಜ ಬದಲಾವಣೆಗೆ ಪ್ರೇರೇಪಿಸುವಂತಹ ವ್ಯಕ್ತಿತ್ವ ರಾಜಕುಮಾರ ಅವರದಾಗಿತ್ತು’ ಎಂದು ತಿಳಿಸಿದರು.