ಆನಂದ ಅಸ್ನೋಟಿಕರ್ ಮಾತನಾಡಿ, ‘ಉತ್ತರ ಕನ್ನಡದ ಜನರು ಬದಲಾವಣೆ ಬಯಸಿದ್ದಾರೆ. ಸಂಸದರು ಮಾತು, ಅವರ ವರ್ತನೆ ನೋಡಿ ಜನರು ಬದಲಾವಣೆಗೆ ತೀರ್ಮಾನಿಸಿದ್ದಾರೆ. ಕೇವಲ ಧರ್ಮ, ಜಾತಿಯ ಆಧಾರದ ಮೇಲೆ ಅವರು ಮಾತನಾಡುತ್ತಾರೆ. ಐದು ವರ್ಷಗಳ ಅವಧಿಯಲ್ಲಿ ಕೊನೆಯ ಐದು ತಿಂಗಳು ಸಾರ್ವಜನಿಕರಿಗೆ ಮುಖ ತೋರಿಸುತ್ತಾರೆ. ಹಿಂದೂ ಎಂದು ಹೇಳಿಕೊಳ್ಳುವ ಹೆಗಡೆ ಅವರು, ಹಿಂದೂಗಳ ಮಕ್ಕಳಿಗೆ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.