ದೇಶದಾದ್ಯಂತ ಕೋವಿಡ್ನಿಂದ ಮೃತರ ಶವಗಳನ್ನು ಅಗೌರವಯುತವಾಗಿ ಸಂಸ್ಕಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅದನ್ನು ಹೋಗಲಾಡಿಸಲು ವಿದ್ಯುತ್ ಚಿತಾಗಾರಗಳ ಸ್ಥಾಪನೆಯಿಂದ ಸಾಧ್ಯವಿದೆ. ಇದಕ್ಕೆ ಸ್ಮಶಾನದಂತೆ ಹೆಚ್ಚಿನ ಜಾಗ ಹಾಗೂ ಕಟ್ಟಿಗೆಯ ಅವಶ್ಯಕತೆಯಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಈ ಸಂಬಂಧ ನಿಯಮಾವಳಿ ರೂಪಿಸಿ, ಸರ್ಕಾರಿ ಜಾಗದಲ್ಲಿ ಚಿತಾಗಾರ ಆರಂಭಿಸಬೇಕು ಎಂದು ಒತ್ತಾಯಸಿದ್ದಾರೆ.