ಕಿರವತ್ತಿ ಅಲ್ಕೇರಿಯ ಆದಂಸಾಬ್ ಅತ್ತಾರ್, ಮೋದಿನ್ ಸಾಬ್ ಅತ್ತಾರ್ ಹಾಗೂ ಮದ್ನೂರಿನ ಮಾದೇವಕೊಪ್ಪದ ಬಾಬು ದೋಂಡು ಪಾಂಡ್ರಮೀಸೆ, ಕಾಳು ದೋಂಡು ಪಾಟೀಲ್ ಸೇರಿದಂತೆ ಹತ್ತಾರು ರೈತರ ನೂರಾರು ಎಕರೆ ಬೆಳೆ ನಾಶವಾಗಿದೆ. ಅತಿಯಾದ ಮಳೆಯಿಂದ ಹತ್ತಿ, ಗೋವಿನ ಜೋಳದ ಬೆಳೆ ನೆಲಕಚ್ಚಿವೆ.ಭತ್ತದ ಬೆಳೆ ಉತ್ತಮ ಫಸಲುಬಂದು ಕೈ ಹಿಡಿಯುತ್ತದೆ ಎನ್ನುವಷ್ಟರಲ್ಲೇ ಆನೆಗಳ ಉಪಟಳ ಕಾಣಿಸಿಕೊಂಡಿದೆ. ಇದು ರೈತರನ್ನು ಚಿಂತೆಗೆ ದೂಡಿದೆ.