‘15 ವರ್ಷದ ಹಿಂದೆ ಕೈಲಾಸ ಗುಡ್ಡ ರಕ್ಷಣೆಗಾಗಿ ನಡೆದ ಚಳವಳಿ ಸಂದರ್ಭದಲ್ಲಿ ಹುಟ್ಟಿದ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿಯು ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದೆ. ಜಲಸಂವರ್ಧನೆ, ಬೆಟ್ಟ ಅಭಿವೃದ್ಧಿ, ಜೇನು ಕೃಷಿ, ಫಲ ವೃಕ್ಷವನ ಸೇರಿದಂತೆ ಹಲವು ಸುಸ್ಥಿರ ಅಭಿವೃದ್ಧಿ ಕಾಯಕದಲ್ಲಿ ಗ್ರಾಮದ ಯುವಜನತೆಯನ್ನು ಸಕ್ರಿಯವಾಗಿ ತೊಡಗಿಸಿದ್ದು ಗಮನಾರ್ಹ’ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬಣ್ಣಿಸಿದ್ದಾರೆ.