ಆರ್ಎಸ್ಎಸ್ಗೆ ದಲಿತರ ಮಾತು ಎಂದಿಗೂ ಅರ್ಥವಾಗುವುದೇ ಇಲ್ಲ. ದೇಶದಲ್ಲಿ ದಲಿತ ಮೇಲೆ ಸಾಲು ಸಾಲು ಹಲ್ಲೆಗಳಾಗುತ್ತಿವೆ. ಆದರೆ, ಆರ್ಎಸ್ಎಸ್ರನವರಾಗಲಿ, ಮೋದಿ ಅವರಾಗಲಿ ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಅತ್ಯಂತ ಭ್ರಷ್ಟರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ರೆಡ್ಡಿ ಸೋದರರನ್ನು ರಕ್ಷಿಸುತ್ತಿರುವುದು ಏಕೆ ಎಂಬ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದರು.