ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮೂಲಿಮನಿ (ಕುರುಹಿನಶೆಟ್ಟಿ) ಹಾಗೂ ಮತ್ತಿಗಟ್ಟಿ ಬಂಧುಗಳ ಕುಟುಂಬದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇಂತಹ ದೃಶ್ಯ ಕಂಡುಬಂತು. ಚನ್ನಬಸಪ್ಪ ಜೊತೆ ಕವಿತಾ ಹಾಗೂ ಮಹಾದೇವ ಜೊತೆ ಸವಿತಾ ಹೊಸ ಜೀವನಕ್ಕೆ ಕಾಲಿಟ್ಟರು. ಬೆಳ್ಳಿ, ಬಂಗಾರ, ಸೀರೆ, ದುಡ್ಡು ಎಂಬ ಮಾತುಗಳೇ ಮದುವೆ ಸಮಾರಂಭದಲ್ಲಿ ಕೇಳಿಸುವುದು ಸಾಮಾನ್ಯ. ಇಲ್ಲಿ ಮಾತ್ರ ಪರಿಸರ ಜಾಗೃತಿ, ನೇತ್ರದಾನದ ಬಗ್ಗೆ ಸ್ವಾಮೀಜಿ, ಅರಣ್ಯಾಧಿಕಾರಿ, ವೈದ್ಯರು ಒಂದು ಗಂಟೆ ಕಾಲ ತಿಳಿವಳಿಕೆ ನೀಡಿದರು.