ಗ್ರೀನ್ ಇಂಡಿಯಾ ಸಂಸ್ಥೆಯ ಮಹೇಂದ್ರಕುಮಾರ್ ಮಾತನಾಡಿ, ನಾವೆಲ್ಲ ಒಂದು ಎಂದು ಗಟ್ಟಿಧ್ವನಿ ಎತ್ತುವುದೇ ಈಚೆಗೆ ಕಷ್ಟವಾಗುತ್ತಿದೆ. ಭ್ರಾತೃತ್ವ, ಸಹಬಾಳ್ವೆ, ಸಮಾನತೆ ಈಗಿನ ಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ ಎಂದರು. ಪತ್ರಕರ್ತ ಕನ್ನೇಶ್ ಕೋಲಸಿರ್ಸಿ ಮಾತನಾಡಿ, ಸಮಾಜದಲ್ಲಿ ಅಶಾಂತಿ ವಾತಾವರಣ ಮೂಡದಂತೆ ನಿಯಂತ್ರಿಸುವ ಸರ್ಕಾರ ನಿಷ್ಕ್ರಿಯವಾದಾಗ ಸೌಹಾರ್ದ ಸಮಾವೇಶದ ಅಗತ್ಯತೆ ಮುನ್ನೆಲೆಗೆ ಬಂದಿದೆ ಎಂದರು. ಮಂಜುನಾಥ ನಾಯ್ಕ ಸ್ವಾಗತಿಸಿದರು. ಡಾ.ಮೆಹಬೂಬ ಅಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.