‘ಸನವಳ್ಳಿ ಭಾಗದ ರೈತರು ಸುಮಾರು 240 ಎಕರೆ ಪ್ರದೇಶದಲ್ಲಿ, ಪ್ರತಿವರ್ಷದಂತೆ ಈ ವರ್ಷವೂ 1001, 1010 ತಳಿಯ ಭತ್ತವನ್ನು ಬೆಳೆದಿದ್ದಾರೆ. ಭತ್ತ ತೆನೆ ಬಿಡುವ ಹಂತದಲ್ಲಿಯೇ, ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಇಳುವರಿ ಕುಂಠಿತವಾಗಲಿದ್ದು, ಶೇ 10-20ರಷ್ಟು ಫಸಲು ಮಾತ್ರ ಕೈಗೆ ಸಿಗುವ ಸಾಧ್ಯತೆಯಿದೆ’ ಎಂದು ರೈತರಾದ ರಾಜು ಗುಬ್ಬಕ್ಕನವರ್, ಮಂಜು ಕೋಣನಕೇರಿ, ಫಕ್ಕೀರಪ್ಪ ಬೋಕಿಯವರ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇತರ ರೈತರು ಕೃಷಿ ಅಧಿಕಾರಿಯ ಗಮನಕ್ಕೆ ತಂದರು.