ಸುಭಾಷ್ ವಡ್ಡರ್ ಸಹಿತ ಸ್ಥಳದಲ್ಲಿದ್ದ 10ಕ್ಕೂ ಹೆಚ್ಚು ರೈತರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಬಂದ ಸಹಾಯಕ ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ರೈತರೊಂದಿಗೆ ಚರ್ಚಿಸಿದರೂ, ಸುಮಾರು ಒಂದು ಗಂಟೆ ಕಾಲ ರೈತರು ಪಟ್ಟು ಸಡಿಲಿಸಲಿಲ್ಲ. ನಂತರ ಗೋದಾಮಿನಲ್ಲಿದ್ದ ನೂರರಷ್ಟು ಯೂರಿಯಾ ಗೊಬ್ಬರ ಚೀಲಗಳಲ್ಲಿ, ಮೊದಲೇ ಬಿಲ್ ಮಾಡಿದವರಿಗೆ ನೀಡಿ, ಉಳಿದವುಗಳಲ್ಲಿ ಪ್ರತಿಭಟಿಸುತ್ತಿದ್ದ ರೈತರಿಗೆ ತಲಾ 3-4 ಚೀಲಗಳಂತೆ ಹಂಚಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.