ಕೆಲವು ಜಮೀನುಗಳ ಪಹಣಿಯಲ್ಲಿ ಬೆಳೆ ಕಾಲಂ ಖಾಲಿ ಬಿಡಲಾಗಿದೆ. ಪ್ರತಿ ಬಾರಿ ಇಂತಹ ಸಮಸ್ಯೆ ಮುಂದುವರಿಯುತ್ತಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಳೆ ಆಧರಿಸಿ ಬೆಳೆಸಾಲ ನೀಡಲಾಗುತ್ತದೆ. ಬೆಳೆವಿಮೆಗೂ ಇದೇ ಪ್ರಧಾನವಾಗಿದೆ. ಆದರೆ, ಈಗಿರುವ ದೋಷ ಪರಿಗಣಿಸಿದರೆ ಸಾಲ ಸಿಗುವುದು ಕಷ್ಟ ಎಂಬುದು ಬಹುತೇಕ ರೈತರ ಅಭಿಪ್ರಾಯ.