ಹಳಿಯಾಳ: ‘ಅನೇಕ ವರ್ಷಗಳ ನಂತರ ಬರಿದಾದ ಸೂಪಾ ಜಲಾಶಯದ ಹಿನ್ನೀರಿನಲ್ಲಿ ಈ ಹಿಂದೆ ಮುಳುಗಡೆಯಾದ ಗ್ರಾಮಗಳ ಕುರುಹುಗಳು ಗೋಚರಿಸುತ್ತಿವೆ. ದೇವಸ್ಥಾನ, ಬಾವಿ, ವಿಗ್ರಹಗಳು ಒಂದೊಂದಾಗಿ ಕಾಣುತ್ತಿವೆ. ಅವುಗಳನ್ನು ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ, ದಾಖಲಿಸಿ ಸುಪರ್ದಿಗೆ ಪಡೆದು ಸಂರಕ್ಷಿಸಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.