ಮೊದಲೇ ನಿಗದಿಯಾದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಉಪಸ್ಥಿತಿಯಲ್ಲಿ, ಕುಮಟಾ ಶಾಸಕ ದಿನಕರ ಶೆಟ್ಟಿ ಲೋಕಾರ್ಪಣೆಗೊಳಿಸಲಿದ್ದರು. ಆದರೆ, ಮೀನು ಮಾರುಕಟ್ಟೆಯ ಸ್ಥಳ ಅಂಕೋಲಾ ತಾಲ್ಲೂಕಿಗೆ ಸೇರಲಿದ್ದು, ಅಲ್ಲಿಯ ಶಾಸಕಿ ರೂಪಾಲಿ ನಾಯಕ ಉದ್ಘಾಟಿಸಬೇಕು ಎಂದು ಅಂಕೋಲಾ ತಾಲ್ಲೂಕು ಆಡಳಿತ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಉದ್ಘಾಟನೆಗೆ ಬಂದಿದ್ದ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸದೇ ತಿರುಗಿ ಹೋಗಿದ್ದರು.