ಜಿಲ್ಲೆಯ ವಿವಿಧ ಬಂದರುಗಳಲ್ಲಿ ಅದರಲ್ಲೂ ಕಾರವಾರ ಮತ್ತು ಭಟ್ಕಳದಲ್ಲಿ ಒಡಿಶಾ, ಪಶ್ಚಿಮ ಬಂಗಾಳದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಹೋದವರಲ್ಲಿ ಹಲವರು ವಾಪಸ್ ಬಂದಿಲ್ಲ. ಬಂದವರಲ್ಲಿ ಹಲವರು ಈ ವರ್ಷ ಎರಡು ತಿಂಗಳಿನಿಂದ ಸಮುದ್ರದಲ್ಲಿ ಮತ್ಸ್ಯಕ್ಷಾಮದಿಂದಾಗಿ ಕೆಲಸವಿಲ್ಲದೇ ಜಿಲ್ಲೆಯನ್ನು ತೊರೆದಿದ್ದರು.